21/09/2016
ಇದಪ್ಪ ನ್ಯೂಸ್
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ್ಯಾಯಧೀಶರನ್ನೇ ಆರೋಪಿಗಳನ್ನಾಗಿಸಿ ರಿಟ್ ಅರ್ಜಿ ಸಲ್ಲಿಸಿದ ಮಂಡ್ಯದ ವ್ಯಕ್ತಿ….!
ಮಂಡ್ಯ, ಸೆ.09, 2016 : (www.justkannada.in news ) : ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಅಧಿಕಾರ ವ್ಯಾಪ್ತಿಯನ್ನು ಮೀರಿ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ನ ಮೂವರು ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಮಂಡ್ಯ ನಿವಾಸಿ 54 ವರ್ಷದ ಎಂ.ಡಿ.ರಾಜಣ್ಣ ಎಂಬುವವರೇ ಈ ರಿಟ್ ಅರ್ಜಿ ಸಲ್ಲಿಸಿರುವವರು. ಇವರ ಅರ್ಜಿಯನ್ನು ಅಂಗೀಕರಿಸಿದ ನಗರದ ಜೆಎಂಎಫ್ ಸಿ ನ್ಯಾಯಾಲಯದ ವಿಚಾರಣೆಯನ್ನು ಸೆ.14 ಕ್ಕೆ ಮುಂದೂಡಿದೆ.
ಅರ್ಜಿದಾರರಾದ ರಾಜಣ್ಣ, ಭಾರತೀಯ ಸಂವಿಧಾನ ಆರ್ಟಿಕಲ್ 262 ಅನ್ವಯ ಅಂತರಾಜ್ಯ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮೂಗು ತೂರಿಸುವ ಅಧಿಕಾರವಿಲ್ಲ. ಆದರೂ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಟಿ.ಎಸ್.ಠಾಕೂರ್, ದೀಪಕ್ ಮಿಶ್ರ ಹಾಗೂ ಉದಯ ಉಮೇಶ್ ಲಲಿತ್ ಅವರನ್ನು ಕ್ರಮವಾಗಿ ಒಂದು, ಎರಡು ಹಾಗೂ ಮೂರನೇ ಆರೋಪಿಯನ್ನಾಗಿ ಹಾಗೂ ಇದೇ ಪ್ರಕರಣದಲ್ಲಿ ತಮಿಳುನಾಡು ಸಿಎಂ ಜಯಲಲಿತ ಅವರನ್ನು 4 ನೇ ಆರೋಪಿಯನ್ನಾಗಿ, ತಮಿಳುನಾಡು ಸರಕಾರದ ಮುಖ್ಯಕಾರ್ಯದರ್ಶಿಯನ್ನು 5 ನೇ ಆರೋಪಿ, ಕರ್ನಾಟಕ ಸರಕಾರದ ಮುಖ್ಯಕಾರ್ಯದರ್ಶಿಯನ್ನು 6 ನೇ ಆರೋಪಿಯನ್ನಾಗಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 7 ನೇ ಆರೋಪಿಯನ್ನಾಗಿ ರಿಟ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.
ದಯವಿಟ್ಟು ಇದನಾದ್ದರು ಎತ್ತಿ ಹಿಡಿದು ನ್ಯಾಯ ಸಿಗುವಂತೆ ಮಾಡಿ. *ಈ ಮಾಹಿತಿ ನಿಮ್ಮ ಗಮನಕ್ಕಿರಲಿ*
"ಬಾಬಾ ಸಾಹೇಬ್ ಅಂಬೇಡ್ಕರರು ಬರೆದಿರುವ ನಮ್ಮ ಸಂವಿಧಾನದ ಆರ್ಟಿಕಲ್ 262 ರ ಪ್ರಕಾರ ಅಂತರರಾಜ್ಯ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋಟಿ೯ಗೆ ತೀರ್ಪು ನೀಡುವ ಅಧಿಕಾರ ಇಲ್ಲ,ಒಂದು ವೇಳೆ ತೀಪು೯ ನೀಡಿದರೂ ಅದೇ ಅಂತಿಮವಲ್ಲ".....!!!!!!!!
(ಸಂವಿಧಾನ'ವನ್ನ ಅರಿಯದ ಭಾರತದ ವಕೀಲರು ಮತ್ತು ಜನರು)